“ಶಾರ್ಟ್ ನಿಫ್ಟೀ @ ೫೦೦೦” ಅಂತ ಬಂದ ಮೆಸೇಜ್, ಇದು ಇವತ್ತಿನ ಹತ್ತನೆಯ ಮೆಸೇಜ್. Do not Distrurb ಅಂತ ಸರ್ವಿಸ್ ಪ್ರವೈಡರ್ ಹತ್ತಿರ ನೋಂದಾಯಿಸಿ ಕೊಂಡ ಮೇಲೂ, ಈ ತರಹದ ಕಾಟ ತಪ್ಪಿಲ್ಲವಲ್ಲ, ದಿನಕ್ಕೆ ಬೇಡದ ಹತ್ತು ಮೆಸೇಜ್ ಗಳು ಬಂದರೆ ಆಗೋ ಹಿಂಸೆ , ಅನುಭವಿಸಿದವರಿಗೆ ಗೊತ್ತು. ಹೋದ ಬಾರಿ Alumni Association ಮೀಟಿಂಗ್ ನಲ್ಲಿ ಸಿಕ್ಕಿ, ನಾನು ಸ್ಟಾಕ್ ಮಾರ್ಕೆಟ್ Derivative ಸ್ಟ್ರ್ಯಾಟಜೀ ಕೊಡೋ ಬಿಸ್ನೆಸ್ ಶುರು ಮಾಡಿದ್ದೀನಿ ಸಬ್ಸ್ಕ್ರೈಬ್ ಮಾಡಿ ಅಂತೆಲ್ಲಾ ಕೊರೆದಿದ್ದನಲ್ಲ, ಅವನದೇ ಕಿತಾಪತಿ ಇರಬಹುದು ಅಂತ ಅನ್ನಿಸ್ತು. “ಸಧ್ಯಕ್ಕೆ ಕ್ಯಾಶ್ ಮಾರ್ಕೆಟ್ ನಲ್ಲೇ ನನ್ನದೇನಿದ್ರೂ ವ್ಯವಹಾರ, Derivative ಸ್ಟ್ರ್ಯಾಟಜೀ ನನಗೆ ಬೇಡ” ಅಂತ, ಖಡ ಖಂಡಿತವಾಗಿ ಹೇಳಿದ್ದರೂ, mass message ಲಿಸ್ಟ್ ನಲ್ಲಿ ನನ್ನ ನಂಬರ್ ಸೇರಿಸಿಕೊಂಡಿದ್ದಾನಲ್ಲ, ದರಿದ್ರದವನು ಅಂತೆಲ್ಲಾ ಬೈಕೊಂಡು ಸುಮ್ಮನಾದೆ.
ನಾನು ಹಾಕಿದ ಶುಕ್ರವಾರದ ರಜೆಯು ಸೇರಿ, ಕಂಟಿನ್ಯುವಸ್ ನಾಲ್ಕು ದಿವಸ ರಜೆ ಇಂದಿನಿಂದ. ಮಹಾಲಯ ಅಮಾವಾಸ್ಯೆ ದಿನ ಡ್ರೈವ್ ಮಾಡ್ಕೊಂಡು ಬರ್ಬೇಡ ಶನಿವಾರ ಬಂದ್ರೆ ಸಾಕು ಊರಿಗೆ ಅಂತ ನಿನ್ನೆನೆ ಅಮ್ಮ ಉಪದೇಶ ಕೊಟ್ಟಿದ್ದಾಳೆ. ಇದೆಲ್ಲ ಕೇಳದ ಪ್ರಾಣಿ ನಾನು ಅಂತ ಗೊತ್ತಿದ್ದರು ಸಹಿತ. ಇವತ್ತು ಹೊರಟರೆ ಊರು
ತಲುಪೊ ಹೊತ್ತಿಗೆ ಇನ್ನೊಂದು ಹತ್ತು ಸಲ ಫೋನ್ ಮಾಡಿ ತಲೆ ತಿನ್ನೋದು ಗ್ಯಾರೆಂಟೀ ಅದರ ಬದಲು, ನಾಳೆ ಹೋಗೋದೆ ವಾಸಿ ಅಂತ ತೀರ್ಮಾನಿಸಿ , ವಾರ್ಡ್ರೋಬ್ ಕ್ಲೀನ್ ಮಾಡಿ ಬಿಡೋಣ ಅನ್ನುವ ತಿಂಗಳಿನಿಂದ ಪೆಂಡಿಂಗ್ ಇರುವ ಕಾರ್ಯವನ್ನ to do ಲಿಸ್ಟ್ ಗೆ ಹಾಕಿಕೊಂಡಿದ್ದೀನಿ.
CNBC ನಲ್ಲಿ ಉದಯನ್ ಮುಖರ್ಜಿ ಸಹ ಮಾರ್ಕೆಟ್ ಡೈರೆಕ್ಶನ್ ಬಗ್ಗೆ ತಲೆ ಕೆಡಿಸ್ಕೊಂಡಿದ್ದಾನೆ. ಬೀದಿ ಕೊನೆಯ ದೇವಸ್ಥಾನದಲ್ಲಿ, ಮಹಾಲಯ ಅಮಾವಾಸ್ಯೆ ಯ ಶಾಂತಿ ಹೋಮ ನಡೀತಿದೆ. ಬಹಳ ದಿನಗಳ ನಂತರ ಫೋನ್ ಮಾಡಿದ, ಗೆಳೆಯನೊಬ್ಬ, ಹೊದಬಾರಿ ಸಿಕ್ಕಾಗ “ಸತ್ಯಂ ಈಸ್ ನೌ ಇನ್ ಸೇಫ್ ಹ್ಯಾಂಡ್ಸ್” ಅಂತ ಹೇಳಿದ್ದೀಯಲ್ಲ, ಈ ರೇಟ್ ನಲ್ಲಿ ಇನ್ವೆಸ್ಟ್ ಮಾಡ್ಬಹುದೇನೋ ಅಂತ ಕೇಳಿದ. ಅವನ ಹತ್ತಿರ ಒಂದತ್ತೂ ನಿಮಿಷ ಮಾತಡಿ ಮುಗಿಸೋದ್ರಲ್ಲಿ ಮತ್ತೊಂದು ಮೆಸೇಜ್ ಈ ಬಾರಿ ಮತ್ತೊಬ್ಬ ಗೆಳೆಯ ಫಾರ್ವರ್ಡ್ ಮಾಡಿದ, ಖ್ಯಾತ ಜ್ಯೋತಿಷಿ ಯೊಬ್ಬರು ಸ್ಟಾಕ್ ಮಾರ್ಕೆಟ್ ಬಗ್ಗೆ ನೀಡಿದ, ಫೋರ್ಕಾಸ್ಟ್.
ಎಂಟು ವರ್ಷದ ಹಿಂದೆ ಷೇರು ಮಾರುಕಟ್ಟೆ ಗೆ ಮೊದಲ ಬಾರಿ ಪಾದಾರ್ಪಣೆ ಮಾಡಿದಾಗ, ಮುಹೂರತ್ ಟ್ರೇಡಿಂಗ್ ನಲ್ಲಿ ಯಾವುದಾದರೂ ಒಂದು ಸ್ಟಾಕ್ ಖರೀದಿ ಮಾಡಿದರೆ, ಅದು ಅವರ ಜೀವನದ ದಿಕ್ಕನ್ನೇ ಬದಲಾಯಿಸಿ ಬಿಡುತ್ತದೆ ಎಂದು ಪುಣ್ಯಾತ್ಮರೊಬ್ಬರು, ಷೇರು ಮಾರುಕಟ್ಟೆಯ ಮೊದಲ ಮೂಢ ನಂಬಿಕೆಯ ಪಾಟ
ವನ್ನು ಹೇಳಿದ್ದರು. ಕೆಲವು ವರ್ಷ ಗಳ ನಂತರ, ಆ ಮನುಷ್ಯ k-10 ಸ್ಕ್ರೀಪ್ಸ್ ನಲ್ಲಿ ಸಾಕಷ್ತ್ಟುಕೈ ಸುಟ್ಟಿ ಕೊಂಡಿದ್ದವರು ಎಂದು ತಿಳಿಯಿತು.
ಪಕ್ಕಾ ವ್ಯವಹಾರಸ್ತರೂ ತುಂಬಿರುವ ಈ ಷೇರು ಮಾರುಕಟ್ಟೆಯಲ್ಲಿನ ಕೆಲವು ಪಾಪ್ಯುಲರ್ ಮೂಢ ನಂಬಿಕೆಗಳು ಹಾಗೂ ಕೆಲವು ವಿಲಕ್ಷಣ ವ್ಯಕ್ತಿತ್ವದ ಟೇಡರ್ಸ್ ಗಳ ಬಗ್ಗೆ ಇನ್ನೊಮ್ಮೆ ಯಾವಾಗಲಾದರೂ ಬರೆಯುತ್ತೇನೆ. ಸಧ್ಯಕ್ಕೆ ದಕ್ಷಿಣ ಬೆಂಗಳೂರಿನಲ್ಲಿ ಧಾರಾಕಾರ ಮಳೆ.