ಕಳೆದೇ ಹೋದ ಹತ್ತು ದಿನಗಳು..

ಅಯ್ಯೋ  ಕಳೆದೇ  ಹೋಗಿಬಿಟ್ಟಿತು, ಹತ್ತು ದಿನಗಳುಸುಮಾರು ಒಂದು ತಿಂಗಳು ಹಿಂದಿನಿಂದ ಹೊಡೆದಾಡಿ,  ಸ್ಯಾಂಕ್ಶನ್ ಮಾಡಿಸಿಕೊಂಡಿದ್ದ ಹತ್ತು ದಿನಗಳ year end leave ಮುಗಿದೆ ಹೋಗಿದೆ. ೨೪ ಡಿಸೆಂಬರ್ ರಾತ್ರಿ  ತಯಾರಿಸಿದ್ದ ಒಂದು ವರೆ ಮೊಳ ಉದ್ದದ `to do list`  ನಲ್ಲಿ ಇನ್ನೂ ಅರ್ಧಕ್ಕಿಂತ ಹೆಚ್ಚು `to do` ಗಳು ಟಿಕ್ ಆಗದೇ ಉಳಿದಿದೆ. ಆದರೆ ಕ್ಯಾಲಂಡರ್ ನಲ್ಲಿ ಹತ್ತು ದಿನಗಳು ಟಿಕ್ ಆಗೋಗಿದೆ. ನಿಜವಾಗ್ಲೂಜಿಪುಣ ಅಂದ್ರೆ ಜಿಪುಣ ಕಾಲ..” ಶಿವಮೊಗ್ಗ ಕಡೆ ತಲೆ ಹಾಕಿ ಮೂರು ವರ್ಷಗಳು ಆಯ್ತು ಅನ್ನುವ record ಆಗಕ್ಕೆ ಬಿಡಬಾರದೆಂದು ಎಷ್ತ್ತೆ ಅಂದು ಕೊಂಡರೂ, ಆಗಲಿಲ್ಲ record ಆಗೇ ಹೋಯ್ತು.

ಹತ್ತು ದಿನಗಳ ಮಹತ್ಸಾಧನೆಯೆಂದರೆ ಸಂಪೂರ್ಣ ಐದು ದಿನಗಳನ್ನು ಮೈಸೂರಿನ ಮನೆಯಲ್ಲಿ ಕಳೆದದ್ದು. ನಂಜನಗೂಡು, ಕ್ಯಾಲಿಕಟ್ ಅಥವಾ ಹುಣಸೂರು ರಸ್ತೆಗಳಲ್ಲಿ ಅರ್ಲೀ ಮಾರ್ನಿಂಗ್ ಲಾಂಗ್ ಡ್ರೈವ್ ಗಳು (with front windows open :-) ), ಹಾಗೂ ಕಣ್ತುಂಬಾ ಮಾಡಿದ ನಿದ್ದೆ, ಹೊಟ್ಟೆ ತುಂಬಾ ಮನೆಯ ಉಟ, ಸಂಜೆಯ ಮೇಲೆ ಶಾಸ್ತ್ರಕ್ಕೆ ಒಂದು ಬಾರಿ ಮೈಲ್ ಚೆಕ್ ಮಾಡಿದರೆ ಆಯ್ತು, ಇದೆ ಐದು ದಿನಗಳ ದಿನಚರಿ.

ಚಿಕ್ಕವನಿದ್ದಾಗ ಶಾಲೆಯಿಂದ ಬರ್ತಾ ಬೀದಿಲಿ ಕಂಡ ಕಂಡ, ನಾಯಿ ಮರಿಗಳನ್ನು ಎತ್ತಿ ಕೊಂಡು ಬರ್ತಿದ್ದ ನನ್ನ ಮೇಲೆ ಹರಿಹಾಯುತಿದ್ದ ನನ್ನಪ್ಪ, ಇಂದು ಪ್ರತಿ ದಿನಾ ಬೆಳಿಗ್ಗೆ ಹಾಲು ತರುವಾಗ ಬೀದಿಯ ಟಾಮಿಗೆ ಒಂದು ಬನ್ ಹಾಕ್ತಾರಲ್ಲ ಇದು ನಿಜವಾಗ್ಲೂ ಪವಾಡವೆ ಸರಿ!!!!

ಮೂವತ್ತು ವರ್ಷಕ್ಕೂ ಮೀರಿ ಕಾಲೇಜಿನಲ್ಲಿ ವಿಧ್ಯಾರ್ಥಿಗಳಿಗೆ ಪಾ ಮಾಡಿದ್ದು ಸಂಪೂರ್ಣವಾಗಿ ಮರೆತು, ಮನೆಯ ಹಿತ್ತಿಲಿನಲ್ಲಿರೋ ಬೆರಳೆಣಿಕೆಯಷ್ಟ್ತು ತೆಂಗಿನ ಮರ ಹಾಗೂ ಬಾಳೆ ಗಿಡಗಳ, ಆರೈಕೆ ಮಾಡುತ್ತಾ  full time ಕೃಷಿ ರಾಗಿರುವ ಅಪ್ಪ, VR ತೊಗೊಂಡ ಮೇಲೆ ಸಂಪೂರ್ಣವಾಗಿ ಮಹಿಳಾ ಸಮಾಜ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಅಮ್ಮಇವರೆಲ್ಲರ ಪ್ರಪಂಚ ಎಷ್ಟ್ತೊದು ಆರಾಮವಾಗಿ ಟೆನ್ಶನ್ ಫ್ರೀ ಆಗಿ ಇದ್ಯಲ್ಲ ಅನ್ನುವ ಹೊಟ್ಟೆ ಉರಿ ಶುರುವಾಗಿ ಬಿಟ್ಟಿದೆ. ದಸರ ರಜ ಮುಗಿದ ಮೇಲೆ ಮತ್ತೆ ಸ್ಕೂಲ್ ಗೆ ಹೋಗಬೇಕೆನ್ನುವ , ಸಂಕಟ ಏನು ಅಂತ ಮಕ್ಕಳಿಗೆ ಮಾತ್ರ ಗೊತ್ತು, ಅದೇ ತರಹದ್ದು ನನ್ನದು ಸಹಾ.

ಸೋಮವಾರದಿಂದ ಶುರುವಾಗುವ ಯುದ್ದಕ್ಕೆ ನಾನು ತಯಾರಿ ಮಾಡಿಕೊತಿದ್ದರೆ, “ಕಾಯಿ ಕೀಳೊ ಹೊತ್ತಿಗೆ ಮರಾನೂ ಕ್ಲೀನ್ ಮಾಡೋ ಅಂದಿದ್ದೆ, `ಹೂ ಬುದ್ದಿ` ಅಂತ ಹೇಳಿ  ಕಳ್ಳನನ್ಮಗ ಹಾಗೆ ಇಳಿದಿದ್ದಾನೆಅಂತ ಅಪ್ಪ ಕೂಗಾಡಿಕೊಂಡು ಓಡಾಡುತಿದ್ರೆ, ಕೈಲೊಂದು `ಸುಧಾ` ಹಿಡ್ಕೊಂಡು ನರಸಿಂಹ ಸ್ವಾಮಿಯವರಹತ್ತು ವರ್ಷದ ಹಿಂದೆ…”ಕೇಳುತ್ತಾ ವೆಸ್ಟ್ ಬಾಲ್ಕನಿ ಯಲ್ಲಿ ಕೂತಿದ್ಡಾಳೆ ಅಮ್ಮ. ಹಾಗೆಯೇ ಒಂದೆರಡು ನಿಮಿಷ ಹಾಡನ್ನು ಕೇಳಿದ ನನಗೆ, ” ನನ್ನ ಕಾಲದ ಸಂಬಂಧ ಗಳಲ್ಲಿ ಪ್ರಾಮಾಣಿಕತೆ ಹಾಗೂ ಸರಳತೆ ಇದ್ಯಾ? ಅಥವಾ ನನ್ನ ಅನುಭವಕ್ಕೆ ಬಂದವುಗಳು ಮಾತ್ರ ಬೇರೆಯ ತರಹದವೇ…” ಎಂಬ ಯೋಚನೆ ಹಾದು ಹೋಯ್ತು. ಯೋಚನೆ ಮಾಡಕ್ಕೆ ಟೈಮ್ ಇಲ್ಲ ಹಾಗೂ ಅದ್ರಿಂದ ಉಪಯೋಗನು ಇಲ್ಲ, I should get back now thats it…

ಹರ್ಷದ್ ಮೆಹ್ತ- ಒಂದು ನೆನಪು

harshad_mehta2  ಡಿಸೆಂಬರ್ 31 ಕ್ಕೆ ಹರ್ಷದ್ ಮೆಹ್ತ ಕೊನೆಯುಸಿರೆಳೆದು ಏಳು  ವರ್ಷಗಳಾಗುತ್ತದೆ ಎನ್ನುವುದನ್ನು ಬಿಟ್ಟರೆ, ಹರ್ಷದ್  ಮೆಹ್ತನನ್ನು ನೆನಪಿಸಿಕೊಳ್ಳುವುದಕ್ಕೆ ವಿಶೇಷ ಕಾರಣಗಳೆನಿಲ್ಲ15,000 . ಅಡಿಯಷ್ಟು ದೊಡ್ಡದಾದ ಐಷಾರಾಮಿ ಬಂಗಲೆ ಯಲ್ಲಿ ಒಂದು ಕಾಲದಲ್ಲಿ ಜೀವಿಸುತಿದ್ದ, ಹತ್ತಾರು ವಿದೇಶಿ ಕಾರುಗಳ ಒಡೆಯನಾಗಿದ್ದಸುಮಾರು ಒಂದು ವರೆ ದಶಕಗಳ ಕಾಲ, ಮಾರುಕಟ್ಟೆ ವಲಯದಲ್ಲಿ ` ಬಿಗ್ ಬುಲ್ಎಂದೇ ಖ್ಯಾತನಾಗಿದ್ದ `Growmore Research and Asset Management ` ಒಡೆಯ ಹರ್ಷದ್ ಶಾಂತಿಲಾಲ್ ಮೆಹ್ತ, ನ್ಯಾಯಾಂಗ ಬಂಧನದಲ್ಲಿದ್ದ (ಥಾನೆ ಕಾರಾಗೃಹದಲ್ಲಿ) ಸಮಯದಲ್ಲಿ ಹೃದಯಾಘಾತ ಕ್ಕೊಳಗಾಗಿ, ಮುಂಬಯಿ ಸಿವಿಲ್ ಹಾಸ್ಪಿಟಲ್ ಒಂದರಲ್ಲಿ , ನಿರ್ಗತಿಕನೊಬ್ಬನಂತೆ ತನ್ನ ಕೊನೆಯುಸಿರೆಳೆದನು. ಅವನ ಸಾವು ಸಹಜವಾದದ್ದೇ? ಅಥವಾ, ಹಗರಣ ವೆಂಬ ವಿಷವರ್ತುಲದಲ್ಲಿ, ಇವನ ಜೊತೆಗಿದ್ದ ಅಥವಾ ಇದ್ದಿರ ಬಹುದಾದ ಮತ್ಯಾವುದೋ ಕಾಣದ ಕೈಯಿನ ಕೈವಾಡವಿತ್ತೇ ಎಂಬ ಮಾತುಗಳು ಇಂದಿಗೂ ಅಲ್ಲಲ್ಲಿ ಕೇಳಿಬರುತ್ತದೆ.

ಕೆಳ ಮಧ್ಯಮ ವರ್ಗದ ಗುಜರಾತಿ ಜೈನ್ ಕುಟಂಬದಲ್ಲಿ ಜನಿಸಿ, ಮುಂದೊಂದು ದಿವಸ ಭಾರತದ ಪ್ರಪ್ರಥಮ  Star Stock broker  ಆಗಿ ಪರಿವರ್ತನೆಗೊಂಡ, ವಾಣಿಜ್ಯ ಶಾಸ್ತ್ರದ ಪದವಿಧರ ಹರ್ಷದ್, ಬಹಳಷ್ಟ್ತು ಮಹತ್ವಾಕಾಂಕ್ಷಿ ಯಾಗಿದ್ದವನು. ” ನಾನು ಕನಸುಗಳ ನ್ನು ಮಾರುತ್ತೇನೆ, ಸಿರಿವಂತನಾಗುವುದು, ಪಾಪವಲ್ಲ, ನೀವು ಹರ್ಷದ್ ಮೆಹ್ತ ನಾಗಲೂ ಬಯಸುತ್ತಿರಾದರೆ, ಶೇರು ಮಾರುಕಟ್ಟೆ ಗೆ ಬನ್ನಿಎಂದು  ಸದಾ ಹೇಳುತ್ತಿದ್ದನು.

90  ದಶಕದಲ್ಲಿ ಅವನೆಷ್ಟ್ತು ಪ್ರಸಿದ್ದ್ದನು ಹಾಗೂ ಆರಾಧ್ಯನಾಗಿದ್ದಾನೆಂದರೆ, ಅವನನ್ನೇ ಅನುಸರಿಸುವ ಹೂಡಿಕೆದಾರರ ಒಂದು ದೊಡ್ಡ ಗುಂಪೇ ಇತ್ತು.92ರಲ್ಲಿ ಪ್ರಥಮ ಬಾರಿಗೆ ಹಗರಣ, ಬೆಳಕಿಗೆ ಬಂದು107 ದಿನಗಳ ಬಂಧನದ ನಂತರ ಜಾಮಿನಿನ ಮೇಲೆ ಹೊರಬಂದ ಹರ್ಷದ್ ನನ್ನು ಕೋರ್ಟ್ ಹೊರಗೆ ಸ್ವಾಗತಿಸುವುದಕ್ಕೆ, ಘೋಷಣೆಗಳನ್ನು ಕೂಗುತ್ತಾ,  ಹೂಡಿಕೆದಾರರ ಒಂದು ದೊಡ್ಡ ಗುಂಪೇ ನೆರದಿತ್ತು. ಹರ್ಷದ್ ಮಾರುಕಟ್ಟೆಗೆ ಮರಳಿ ಬಂದರೆ ಮತ್ತೆ ಮಾರುಕಟ್ಟೆ ಮೇಲಕ್ಕೇರುತ್ತದೆಂಬ ಅಚಲ ನಂಬಿಕೆ ಅನೇಕ ಹೂಡಿಕೆದಾರರಲ್ಲಿತ್ತು.

1990  ಸುಮಾರಿಗೆ ACC ಕಂಪನಿಯ ಶೇರೊಂದಕ್ಕೆ 10,000ರೂಪಾಯಿ ಗಳಿದ್ದ ಸಮಯದಲ್ಲೂ ಸಹ, ಹರ್ಷದ್ ತನಗಿಷ್ಟ್ಟವಾದ Replacement cost Theory ಯನ್ನು ಸದಾ ಉದಾಹರಿಸುತ್ತಾ, ” ಉತ್ತಮ ಹಾಗೂ ಹಳೆಯ ಕಂಪನಿಯ ಶೇರು ಗಳನ್ನು Replacement cost Theory ಆಧಾರದ ಮೇಲೆ value ಮಾಡ ಬೇಕುಎನ್ನುತ್ತಿದ್ದನು( Replacement cost Theory ಯು ಹಳೆಯ ಹಾಗೂ ಒಳ್ಳೆಯ ಕಂಪನಿಗಳನ್ನು, ಅದೇ ರೀತಿಯ ಮತ್ತೊಂದರ ಸ್ಥಾಪನೆಗೆ, ಷ್ಟ್ತು ಹಣ ಬೇಕಾಗುತ್ತದೆ, ಎಂಬ ಸರಳ ನಿಯಮದ ಆಧಾರದ ಮೇಲೆ value ಮಾಡಬೇಕೆನ್ನುತ್ತದೆ)

ಸ್ವತಂತ್ರ ಭಾರತದಲ್ಲಿ ನಡೆದ ಪ್ರತಿಯೊಂದು ಶೇರು ಮಾರುಕಟ್ಟೆ ಹಗರಣವು ಸಹ, ನಮ್ಮ ಆರ್ಥಿಕ/ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಲೋಪ ದೋಷಗಳನ್ನು ಎತ್ತಿ ತೋರಿಸಿದೆ. ಹರ್ಷದ್ ಮೆಹ್ತ ಹಾಗೂ ಅವನ ಸಂಗಡಿಗರು ಸಹ, ಬ್ಯಾಂಕಿಂಗ್ RF (Ready forwards) ಹಾಗೂ BR (Bankers receipt) ವ್ಯವಸ್ಥೆಯಲ್ಲಿದ್ದ ಲೋಪದೋಷವನ್ನುಪಯೋಗಿಸಿಕೊಂಡು, ತಮ್ಮ ಶೇರು ಮಾರುಕಟ್ಟೆ ವ್ಯವಹಾರಕ್ಕೆ ಬೇಕಾದ ಹಣವನ್ನು ಬ್ಯಾಂಕಿಂಗ್ ವ್ಯವಸ್ಥೆಯಿಂದ ಪಡೆಯುತ್ತಿದ್ದರು, ಅದನ್ನು ಮಾರುಕಟ್ಟೆಯಲ್ಲಿ ತೊಡಗಿಸುತಿದ್ದರು, ಇದರಿಂದ ಅವರು ಮುಟ್ಟಿದ ಶೇರು ಗಳೆಲ್ಲಾ ಗಗನದೆತ್ತರಕ್ಕೆ ಏರಿದವು.

1992ರಲ್ಲಿ ಹಗರಣ ಬೆಳಕಿಗೆ ಬಂದ ಮೇಲೂ ಸಹ ಪ್ರತಿ ಹಂತದಲ್ಲೂ ಅವನು, ತನ್ನ ಮೇಲಿದ್ದ ಕೇಸುಗಳನೆಲ್ಲ ಗೆದ್ದು, ಮರಳಿ ಬರುವ ಯತ್ನ ಮಾಡುತ್ತಲೇ ಇದ್ದ97 ಸುಮಾರಿಗೂ ಸಹ Times of India ಸೇರಿದಂತೆ, ಅನೇಕ ದೊಡ್ಡ ಆಂಗ್ಲ ದೈನಿಕಗಳು, ಹರ್ಷದ್ ಮೆಹ್ತ ಕಾಲಂ ತಮ್ಮ ಪೇಪರ್ ಪ್ರಸಾರವನ್ನು ಹೆಚ್ಚಿಸುತ್ತವೆ ಎಂದು ಬಲವಾಗಿ ನಂಬಿದ್ದವು. ಸಾಧಾರಣ ಕುಟುಂಬದಲ್ಲಿ ಜನಿಸಿ, ವ್ಯವಸ್ಥೆಯಲ್ಲಿನ ಲೋಪ ದೋಷಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ಬಹು ಬೇಗ ಎತ್ತರಕ್ಕೇರಿದ ಹರ್ಷದ್ ಮೆಹ್ತ, ಒಂದು ರೀತಿಯಲ್ಲಿ White Tiger  ನಲ್ಲಿ ಬರುವ ಬಲರಾಮ್ ಹಲ್ವಾಯಿಯೆ!!.

ಇದುವರೆಗೂ, ಹರ್ಷದ್ ಮೆಹ್ತ ನಿಂದಾದ ಶೇರು ಮಾರುಕಟ್ಟೆ ಹಗರಣದ ರೂಪಾಯಿ ಪ್ರಮಾಣವೆಷ್ಟ್ಟೆಂಬುದು, ನಿಖರವಾಗಿ ತಿಳಿದಿಲ್ಲ ವಾದರೂ, ಬ್ಯಾಂಕುಗಳಿಗಾ ಮೋಸ, ಶೇರು ಬೆಲೆಯಲ್ಲಿನ ವ್ಯತ್ಯಯಗಳನ್ನು, ಅಂದಾಜಿಸಿ ಸುಮಾರು 4000 ಕೊಟಿ ಗಳೆಂದು ಹೇಳಲಾಗುತ್ತದೆ. (“The great Indian scam story of missing 4000 crores” – Samir K Barua and Jayanth R Varma)ಹರ್ಷದ್ ಮೆಹ್ತ ಮೇಲೆ CBI ಸುಮಾರು 72 ಕ್ರಿಮಿನಲ್  ಕೇಸು ಗಳನ್ನು ದಾಖಲಿಸಿತ್ತು. ಇದರ ಜೊತೆ ಸುಮಾರು 600 ಸಿವಿಲ್ ದಾವೆಗಳು ನಡೆಯುತ್ತಿದ್ದವು. ಅವನ ಕೊನೆಯ ದಿನದ ವರೆಗೆ ಲೆಕ್ಕ ಹಾಕಿದರೆ , ಕೇವಲ ನಾಲ್ಕು ಕೇಸುಗಳಲ್ಲಿ ಮಾತ್ರ ಅವನು convict ಆಗಿದ್ದ.

92 ರಲ್ಲಿ ಪ್ರಕರಣವನ್ನು ಬಯಲಿಗೆಳೆದ, ಹಾಗೂ ಇದರ ಬಗ್ಗೆ ಒಂದು ಧೀರ್ಘವಾದ, ಅನೇಕ ವರ್ಷಗಳ ಕಾಲ best seller ಆಗಿದ್ದ ಪುಸ್ತಕ `The Scam` ಬರೆದ ಪತ್ರಕರ್ತೆ ` ಸುಚೆತ ದಲಾಲ್`` ,ಹರ್ಷದ್ ಮೆಹ್ತ ನಿಧನ ನಂತರ ತಮ್ಮ ಅಂಕಣವೊಂದರಲ್ಲಿ ಹೀಗೆ ಬರೆಯುತ್ತಾರೆ.

“It is a pity that Harshad`s eternal optimism and furious stream of `get rich` ideas were never channelled to more productive ways”

 

Book Talk: Stay Hungry…

thebookಹಾರ್ಲಿಕ್ಸ್ ನಂತಹ ಉತ್ತಮ ಕಂಪನಿಯಲ್ಲಿ ಕೆಲಸ ಮಾಡುತ್ತಿರುವವರೂ ಸಹ ಪ್ರತಿ ಹದಿನೈದು ದಿನಕ್ಕೊಮ್ಮೆ , ‘ಬಿಸ್ನೆಸ್ ಇಂಡಿಯಾ’ ದ ಕೊನೆಯ ಪುಟಗಳನ್ನು ಬೇರೆ ಬೇರೆಯ ಕಡೆ ಇರಬಹುದಾದ ಕೆಲಸಗಳಿಗಾಗಿ ನೋಡುತ್ತಾರೆ ಎಂದರೆ, ‘ಕೆಲಸ ಹುಡುಕುವ ಕೆಲಸ, ಕೇವಲ ಕೆಲಸ ಇಲ್ಲದವರಿಗೆ ಮಾತ್ರವಲ್ಲ, you may not be looking FOR a job, but you would look AT a job’. ‘ಕೆಲಸವೇ ಇಲ್ಲದ ಅನೇಕ ಲಕ್ಷ ಜನ ಪ್ರತಿ ದಿನ ನೌಕರಿಗಾಗಿ ಎಲ್ಲೆಲ್ಲಿ ನೋಡ್ತಾ ಇರಬಹುದು? ಇವರಿಗೆಲ್ಲಾ ಒಂದೇ ಕಡೆ ಸಾವಿರಾರು ಕೆಲಸಗಳ ಬಗ್ಗೆ ಮಾಹಿತಿ ಸಿಗೋ ಹಾಗಾದ್ರೆ ಎಷ್ಟು ಚೆನ್ನಾಗಿರುತ್ತೆ? ಹಾಗೂ ಇದೊಂದು ಒಳ್ಳೆಯ ಬಿಸ್ನೆಸ್ ಐಡಿಯಾನೂ ಸಹ ಆಗಬಹುದಲ್ಲ ?’  ಹೀಗೆ ಒಂದೇ ಸಮಯದಲ್ಲಿ, ಹಾರ್ಲಿಕ್ಸ್ ಕಂಪನಿಯ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತಿದ್ದ ‘ಸಂಜೀವ್ ಬಿಕ್ಚಂದಾನಿ’ಯ ತಲೆ ಅನೇಕ ದಿಕ್ಕು ಗಳಲ್ಲಿ ಓಡುತಿತ್ತು.

ಯಾವತ್ತೋ ಒಂದು ದಿವಸ ಫ್ಲ್ಯಾಶ್ ಆದ ಐಡಿಯಾ ಸಂಜೀವ್ ನ ತಲೆಯಲ್ಲಿ ಕಾರ್ಯರೂಪಕ್ಕೆ ತರುವಷ್ಟುಮಟ್ಟಿಗೆ  ಬಹಳ ದಿವಸಗಳ ಕಾಲ ಬೆಳೆಯಲೇ ಇಲ್ಲ. ಒಂದು ದೊಡ್ಡ ‘ಡ್ಯಾಟ ಬೇಸ್’ ಮಾಡಬಹುದು ಸರಿ, ಆದರೆ ಅದನ್ನ ಸಾವಿರಾರು ಜನಕ್ಕೆ ತಲುಪಿಸುವ ಮಾಧ್ಯಮ ಯಾವುದು?, ಇದರಿಂದ ಹಣ ಗಳಿಸಲಿಕ್ಕೂ ಸಾಧ್ಯವಾ ಎಂಬ ಪ್ರಶ್ನೆಗಳು ಹಾಗೆಯೇ ಉಳಿದವು. ೯೦ ರ ದಶಕದ ಮಧ್ಯ ಭಾಗದಲ್ಲಿ, ಇದೇ ತರಹದ ನೂರೆಂಟು ಯೋಚನೆಗಳನ್ನೂ ತಲೆಯಲ್ಲಿಟ್ಟು ಕೊಂಡು ದೆಹಲಿ ಯ ಪ್ರಗತಿ ಮೈದಾನದಲ್ಲಿ IT ASIA ಎಂಬ ಪ್ರದರ್ಶನದಲ್ಲಿ  ಹೆಜ್ಜೆ ಹಾಕುತಿದ್ದ , ಸಂಜೀವ್ ಗೆ , ಅಲ್ಲಿದ್ದ VSNL ನವರ ಸ್ಟಾಲ್ ನಿಂದ ಭಾರತಕ್ಕೆ ಆಗಿನ್ನೂ ಕಾಲಿಟ್ಟಿದ್ದ ‘ಇಂಟರ್‌ನೆಟ್’  ಹಾಗೂ ‘ವೆಬ್ ಸೈಟ್ ’ ಎಂಬ ಹೊಸ ಬೆಳವಣಿಗೆಗಳ ಬಗ್ಗೆ ಗೊತ್ತಾಯಿತು. ಬಹುಶಃ ಸಂಜೀವ್ ನ ಜೀವನದ ‘ಯುರೇಕ ಮೊಮೆಂಟ್ ’ ಅವನಿಗಾಗಿ ಅಲ್ಲಿ ಕಾಯುತಿತ್ತು.

‘ಸಧ್ಯಕ್ಕೆ ನಿನ್ನ ಸಂಬಳದಲ್ಲಿ ಜೀವನ ನಡೆಸುವ ಗಂಡನಾಗ್ತಿನಿ ನಾನು’ ಎಂದು ಹೇಳಿ ನೌಕರಿಗೆ ವಿದಾಯ ಹೇಳಿ ತಮ್ಮ ಮನೆಯ ಔಟ್ ಹೌಸ್ ನಲ್ಲಿ ಪ್ರಾರಂಭ ಮಾಡಿದ, INFO EDGE ಮುಂದೆ ಅನೇಕ ಕಷ್ಟ ಕೋಟಲೆಗಳನ್ನೆದುರಿಸಿ, ಡಾಟ್ ಕಾಮ್ ಮೆಲ್ಟ್‌ಡೌನ್  ನಿಂದಲೂ ಪಾರಾಗಿ, ಒಂದು ದಿನ ಸುಮಾರು ವಾರ್ಷಿಕ 240 ಕೋಟಿಗೂ ಮೀರಿದ ಆದಾಯವುಳ್ಳ(2500 ಕೋಟಿಗೂ ಮೀರಿದ ಮಾರ್ಕೆಟ್ ಕ್ಯಾಪಿಟಲೈಸೇಶನ್), ನೌಕರಿ.ಕಾಮ್ (Naukari.com)ಎಂಬ ಕಂಪನಿಯಾಗಿ ಬೆಳೆದು ನಿಂತ ಕಥೆ ನಿಜವಾಗಿಯೂ ಕುತೂಹಲಕಾರಿಯೇ.

ಒಂದು ಡಾಟ್ ಕಾಮ್ ಕಂಪನಿಯಾಗಿ ಪ್ರಾರಂಭವಾಗಿ ಆರು ತಿಂಗಳಾದರೂ ಸಹ INFO EDGE ನ ಕಛೇರಿಯಲ್ಲಿ ಇಂಟರ್‌ನೆಟ್ ಸಂಪರ್ಕವೇ ಇಲ್ಲದಿದ್ದದ್ದು, ಹಾಗೂ ೨೦೦೦ ನೇ ಇಸ್ವಿಯ ಹೊತ್ತಿಗೆ ಕೇವಲ ೩೬ ಲಕ್ಷ ವಹಿವಾಟಿದ್ದ ಈ ಕಂಪನಿಯನ್ನು ICICI Ventures, ೪೫ ಕೋಟಿಗೂ ಮೀರಿ value ಮಾಡಿದ್ದು, ಹೀಗೆ ಇನ್ನೂ ಅನೇಕ ಹುಬ್ಬೆರಿಸುವಂತಹ ವಿಷಯಗಳಿವೆ ಇಲ್ಲಿ.

ಇದೊಂದೇ ಅಲ್ಲ, ಇದೇ ತರಹದ ಅಥವಾ ಇನ್ನೂ ಕುತೂಹಲಕಾರಿಯಾದ SINTEX, MPHASIS, MAKEMYTRIP.COM ಸೇರಿದಂತೆ ಒಟ್ಟು ಇಪ್ಪತ್ತೈದು motivating ಆಗಿರತಕ್ಕಂತಹ, ಜೀವನ ಪೂರ್ತಿ ಮಲ್ಟಿನ್ಯಾಶನಲ್ ಗಳ ಹಂಗಿನ ನೌಕರಿಗೆ ಬೀಳದೇ, ತಮ್ಮ ಕನಸುಗಳನ್ನು ನನಸು ಮಾಡುವ ಗುರಿಯನ್ನಿಟ್ಟುಕೊಂಡು ಕಡಿಮೆ ಜನರು ನಡೆದ ಹಾದಿಯಲ್ಲಿ ನಡೆದು ಅತ್ಯುತ್ತಮ ಭಾರತೀಯ ಹಾಗೂ ಭಾರತೀಯ ಮಲ್ಟಿನ್ಯಾಶನಲ್ ಕಂಪನಿಗಳನ್ನು ಕಟ್ಟಿ ಬೆಳಸಿದ ಇಪ್ಪತ್ತೈದು IIM ಅಹ್ಮದಾಬಾದ್ ನ ಹಳೆಯ ವಿಧ್ಯಾರ್ಥಿಗಳ ರೋಚಕ ಕಥೆ ರಶ್ಮಿ ಬನ್ಸಾಲ್ ರವರ ಇತ್ತೀಚಿನ ಪುಸ್ತಕ ‘STAY HUNGRY STAY FOOLISH’.

‘ಗ್ಯಾರೇಜ್ ಒಂದರಲ್ಲಿ ಪ್ರಾರಂಭವಾಗಿ, ಮುಂದೆ ವಿಶ್ವ ವಿಖ್ಯಾತ ಕಂಪನಿಯ ಯಾಯಿತೆಂದು’ ಸರಳವಾಗಿ ಸಿನಿಮೀಯ ಮಾದರಿಯಲ್ಲಾಗಲಿ ಅಥವಾ ಕಂಪನಿಗಳು ಬೆಳೆದು ಬಂದ ಹಾದಿಯನ್ನು ‘ಕೇಸ್ ಸ್ಟಡೀ’ ಯ ತರಹ ಅಂಕಿ ಅಂಶಗಳಿಂದಾಗಲಿ ರಶ್ಮಿ ತುಂಬಿಸಿಲ್ಲ. ಒಂದು ಕಥೆಯಲ್ಲಿರಬಹುದಾದ ರೋಚಕತೆಯನ್ನು ಹಾಗೂ ಪ್ರತಿಯೊಂದು ಕಂಪನಿಯೂ ತನ್ನ ಹಾದಿಯಲ್ಲಿ ಎದುರಿಸಿದ ಸವಾಲುಗಳನ್ನು ನೈಜವಾಗಿ ಚಿತ್ರಿಸುತ್ತಾ ಸಾಗುತ್ತಾರೆ ಬನ್ಸಾಲ್. ಇದು ಕೇವಲ ಸ್ವಂತ ಉದ್ಯಮವನ್ನು ಪ್ರಾರಂಭಿಸಬೇಕೆನ್ನುವ ಆಕಾಂಕ್ಷಿಗಳಿಗೆ ಹಾಗೂ ಮ್ಯಾನೇಜ್ಮೆಂಟ್ ವಿಧ್ಯಾರ್ಥಿಗಳಿಗೆ ಮಾತ್ರ ಸೀಮಿತವಾದ ಪುಸ್ತಕವಲ್ಲ. ಒಬ್ಬ ಸಾಮಾನ್ಯ ಓದುಗನು ಸಹ ಆಸಕ್ತಿಯಿಂದ ಓದಬಹುದಾದ Value for your money ಪುಸ್ತಕ ಇದು.

December 6ರ ಲಹರಿ

cake1ಇವತ್ತಿಗೂ ಅಮ್ಮನ ಪ್ರಕಾರ ನನ್ನ ಹುಟ್ಟಿದ ಹಬ್ಬವೆಂದರೆ ಕಾರ್ತಿಕ ಬಹುಳ ದಶಮಿ  ದಿನವೇ. ಡಿಸೆಂಬರ್  ಏನಿದ್ದರೂ ನನಗೆ, ನನ್ನ ಕೆಲವು ಮಿತ್ರರಿಗೆ ಹಾಗೂ ಅಫೀಶಿಯಲ್ ರೆಕಾರ್ಡ್ಸ್ ಗಳಿಗೆ ಸೀಮಿತವಾದದ್ದು. ನಿನ್ನೆ ನನಗೆ ಫೋನ್ ಮಾಡಿದ ಪರಿಚಯದವರೆಲ್ಲಾ, ” ಹುಷಾರಪ್ಪ, ಅಲ್ಲಿ ಇಲ್ಲಿ ಅಂತ ಹೋಗಬೇಡ. ದೊಡ್ಡ ದೊಡ್ಡ ಹೊಟೆಲ್ ಗಳು, ಮಾಲ್ ಗಳು, ಏರ್ ಟ್ರಾವೆಲ್ ಅಂತೂ ಖಂಡಿತಾ ಬೇಡಅಂತಾನೆ ಹೇಳಿದ್ರು. ಇಲ್ಲಪ್ಪ ನನ್ನ ಜನ್ಮದಲ್ಲಿ ಇದುವರೆಗೂ ಬರ್ತ್‌ಡೇ ಅಂತೆಲ್ಲಾ ಆಚರಿಸಿಕೊಂಡವನೆ ಅಲ್ಲ, ನಾನೇನಿದ್ದರು ಹೊಟ್ಟೆ ತುಂಬಾ ಊಟ, ಕಣ್ಣು ತುಂಬಾ ನಿದ್ದೆ ಮಾಡಕ್ಕೆ ಮೈಸೂರು ಗೆ ಹೋಗ್ತೀನಿ ಅಂತ ಹೇಳಿದೆ.

ಹೋದ ವರ್ಷ ಇದೆ ಸಮಯದಲ್ಲಿ ಅಹ್ಮದಾಬಾದ್ ಗೆ ಹೊರಟಾಗ, “ಡಿಸೆಂಬರ್ , ಗುಜರಾತ್ ಗೆ ಅದು ಅಲ್ಲಿ ಎಲೆಕ್ಶನ್ ಟೈಮ್ , ಜೊತೆಗೆ ಏರ್ ಟ್ರಾವೆಲ್, ಬೇಡ ಅಂದ್ರೆ ಕೇಳ್ತಿಯ? ನೀ ಯಾವತ್ತು ನಮ್ಮ ಮಾತು ಕೇಳಿದ್ದೀಯ?” ಅಂತ ಹೇಳಿ ಮುಗಿಸಿದ್ರು ಹತ್ತಿರದವರೊಬ್ಬರು. ಡಿಸೆಂಬರ್  ನೇ ತಾರೀಖು ಸಂಜೆ ಏಳು ಗಂಟೆಗೆ ಹೊರಡ ಬೇಕಿದ್ದ ವಿಮಾನ, ಮೂರು ಗಂಟೆ ತಡವಾಗಿ ಕೊನೆಗೆ ಅಹ್ಮದಾಬಾದ್ ತಲುಪಿದಾಗ ರಾತ್ರಿ ೧೧:೪೫ ಆಗಿತ್ತು. ಬ್ಯಾಗೇಜ್ ಗೆ ಕಾಯುತ್ತಾ ನಿಂತಾಗ, ಅಲ್ಲಿ ಕಂಡಿದ್ದು ಎಲೆಕ್ಶನ್ ಕವರೇಜ್ ಗೆ ಅಂತ ಬಂದಿದ್ದ NDTV  ಬರ್ಖಾದತ್ ಮತ್ತವಳ ತಂಡ. ಫೋನ್ ಸ್ವಿಚ್ ಆನ್ ಮಾಡಿದ ತಕ್ಷಣ, ಬೆಂಗಳೂರಿನಿಂದ ಕರೆ ಮಾಡಿದ ಗೆಳತಿಮೆನೀ ಮೆನೀ………ಟೇಕ್ ಕೇರ್  “ಅಂತ ಹೇಳಿ ಮುಗಿಸಿದಳು ಜೀವನದಲ್ಲಿ ಸಾಧನೆ ಏನು ಮಾಡದಿದ್ರೂ ಸಹ, ಖಾಲಿ ಡೇಟ್ ಆಫ್ ಬರ್ತ್ ಇಂದ ಇದ್ದಕ್ಕಿದ್ದಂತೆ ನನ್ನ ಪರಿಚಯದವರ ನಡುವಿನಲ್ಲಿ ಪಾಪ್ಯುಲರ್ ಆಗಿಬಿಟ್ಟೇನಲ್ಲ ಅಂತ ಅನ್ನಿಸ್ತು.

ನಿನ್ನೆ ಕರೆಮಾಡಿದ ಕೊಲೀಗ್ ಒಬ್ಬರು ಇನ್‌ವೆಸ್ಟ್‌ಮೆಂಟ್ ಬ್ಯಾಂಕ್  ಒಂದರಲ್ಲಿ ಕೆಲಸ ಮಾಡುತಿದ್ದ, ಮದುವೆಗೆ ಇನ್ನೊಂದು ತಿಂಗಳು ಬಾಕಿಯಿದ್ದ ಅವರ ಮಿತ್ರ ಕೆಲಸ ಕಳೆದುಕೊಂಡಿದ್ದಾನೆ, ಇನ್‌ವೆಸ್ಟ್‌ಮೆಂಟ್ ಬ್ಯಾಂಕ್ ಗಳ ಗ್ರಹಚಾರ ನೆಟ್ಟಗಿಲ್ಲದಿರುವ  ಸಮಯದಲ್ಲಿ ತಕ್ಷಣ ಕೆಲಸ ಸಿಗುವುದು ಕಷ್ಟ್ಟ ಇದೆ, ಮನೆ ಸಾಲ ಬೇರೆ ಮಾಡಿದ್ದಾನೆ, ತಿಂಗಳಿಗೆ ಸುಮಾರು ನಲವತ್ತು ಸಾವಿರ ಕಂತು ಅಂತ ಹೇಳಿದರು. ನಾನು ಹೌಸಿಂಗ್ ಲೋನ್ ಮಾಡಕ್ಕೆ ಮನೇನೆ ಕಟ್ಟಿಲ್ಲ, ಹಾಗೂ ತಿಂಗಳಿಗೆ ಸುಮಾರು ನಲವತ್ತು ಸಾವಿರದಷ್ಟ್ತು ಹೌಸಿಂಗ್  ಲೋನ್ ಗೆ ಕಟ್ಟೋ ಅಷ್ಟ್ತು ಸಂಬಳ ನನಗೆ ಬರಲ್ಲ ಅನ್ನೋ ವಿಷಯ ಮೊದಲ ಬಾರಿಗೆ ಬೇಜಾರುಂಟು ಮಾಡಲಿಲ್ಲ.

ಹೋದ ವಾರ Alumni association ನ  ಮೀಟಿಂಗ್ ನಲ್ಲಿ ಭೇಟಿ ಮಾಡಿದ್ದ ಖಾಸಗಿ ರೀಟೇಲ್ ಬ್ಯಾಂಕ್ ಒಂದರ Associate Vice president   ಒಬ್ಬರು ಫೋನ್ ಮಾಡಿ, ನನ್ನ ಟೀಮ್ ನಲ್ಲಿ ನಿಮಗೆ ಕೆಲ್ಸಾ ಮಾಡಲು ಆಸಕ್ತಿ ಇದೆಯಾ ಅಂತ ಕೇಳಿದ್ರು. ” ತುಂಬಾ ಥ್ಯಾಂಕ್ಸ್ , ಸಧ್ಯಕ್ಕೆ ಬದಲಾವಣೆ ಯೋಚನೆ ಮಾಡ್ತಿಲ್ಲ, ಅದರ ಯೋಚನೆ ಬಂದಾಗ ನಿಮ್ಮನ್ನೇ, ಮೊದಲು ಭೇಟಿ ಮಾಡ್ತೀನಿಅಂತ ಹೇಳಿ ಸುಮ್ಮನಾದೆ. ನಿಜ ಹೇಳಬೇಕಂದ್ರೆ, ಈ, laptop, spreadsheet, budgeting, forecast ಗಳ ಸಹವಾಸನೆ ಸಾಕಾಗಿ ಹೋಗಿದೆ. Travel and living channel ನಲ್ಲಿ  ಬರತ್ತೆ ನೋಡಿ, ಕಂಡ ಕಂಡ ಕಡೆ ಗೊತ್ತು ಗುರಿ ಇಲ್ಲದೇ ಸುತ್ತಿಕೊಂಡು ಕಂಡ ಕಂಡ ಹೊಟೆಲ್ ನಲ್ಲಿ ತಿನ್ನುತ್ತಾ ಅದರ ಬಗ್ಗೆ ತಮ್ಮ ಒಪೀನಿಯನ್ ಕೊಡ್ತಾರಲ್ಲ, ತರಹದ ಕೆಲಸ ಮಾಡಬೇಕಂತ ಮನಸ್ಸಾಗ್ತಿದೆ. ನೋಡಣ ಮುಂದಿನ ಡಿಸೆಂಬರ್ ಹೊತ್ತಿಗೆ ಅಲ್ಲ್ಲಲ್ಲ, ಕಾರ್ತಿಕ ಬಹುಳ ದಶಮಿಯ ಹೊತ್ತಿಗೆ ಏನಾಗಿರುತ್ತೆ ಅಂತ!!!!!!

Fall… fall…. free for all……………….

21621329 

Business confidence index, CEO confidence index, Bankers confidence index, and the likes, suddenly have come to the front pages of business newspapers. My leisure hours during the last fortnight was spent on reading and listening to various views and perspectives on  possible reasons, whether systemic or non systemic, for the current Global financial chaos.

 

On the face of it and according to most analysts, economists and bankers everything started with subprime and the related CDOs.(which now appears truly to be the financial weapons of mass destruction)But one can’t also ignore the preceding bubble in the commodity market from oil, cereals, yellow metal to iron. What made the commodities to hot up? Excess liquidity in the system?, famine in some parts of Africa, or Australia or the excess encouragement given bio fuels which lead to drastic reduction of acreage under food grain cultivation, or the 7+ growth rate of Asian economies.

 

Is it the Americans` penchant for consuming more than they were producing, or the dominant role of US dollar as the global currency, which brings with it the inherent risk of being targeted every time there is crisis of confidence.

 

Am still confused even after reading reams and MBs on this, every other possible reason for the crisis is leading to another more possible and bigger reason which might have triggered today’s catastrophe.

 

During pre election rallies and speeches Obama squarely blamed it on Republicans, John Mc cain had all the regulators at fault for the fiasco. But only few are speaking about those celebrated Credit rating agencies which gave highest investment rating to all those infamous Investment bankers till the day they filed for bankruptcy.

 

Some said, greedy Banking and financial service providers and their Financial engineering to be blamed, while some had faulty policies of central bankers across the world who couldn’t foresee the crisis in the making.

 

So jury is still out on the issue of possible reasons, but as of now its all fall and free fall for all from stock markets, financial services, banking, stock broking, software, commodity, automobile, iron and steel, construction, realty, media, entertainment to the next door kirana shop.

 

So don’t think chicken or egg is the one difficult question to answer, because Economics has plenty of such questions or all question are of that type!!!!!

 

 

ಸುಬ್ಬಮ್ಮ ಹಾಗೂ ಇನ್‌ವೆಸ್ಟ್‌ಮೆಂಟ್ ಬ್ಯಾಂಕುಗಳು….

ಇತ್ತೀಚೆಗೆ ಆಚೆ ಮನೆ ಸುಬ್ಬಮ್ಮನೂ ಕೂಡ, ಎಕನಾಮಿಕ್ ಟೈಮ್ಸ್ ಓದಕ್ಕೆ ಹಾಗೂ CNBC ನೋಡಕ್ಕೆ ಶುರುಮಾಡಿದ್ದಾರೆ. ಸಬ್ ಪ್ರೈಮ್ ಕ್ರೈಸಿಸ್ ಅಂದರೆ ಏನು?, ಲೇಮನ್ ಬ್ರದರ್ಸ್ ಯಾಕೆ ಬ್ಯಾಂಕ್ರಪ್ಟ್ ಆಯ್ತು ಅನ್ನೋ ಪ್ರಶ್ನೆ ಎಲ್ಲಾ ಅವರ ತಲೆಯಲ್ಲೂ ಬರ್ತಾ ಇದೆ. ಸಾಫ್ಟ್‌ವೇರ್ ಕೆಲಸ ಮಾಡ್ತೀರೋ ಮಗನ ವರ್ತನೆ, ಹಾಗೂ ಮನೆಯ ಆರ್ಥಿಕ ಪರಿಸ್ಥಿತಿಗೂ ಹಾಗೂ ಅಮೇರಿಕಾದ ಆರ್ಥಿಕ ಪರಿಸ್ಥಿತಿಗೂ, ಸರಿಯಾಗಿ ಅಲ್ಲದಿದ್ರೂ, ಅಂತೂ ಏನೋ ಸಂಬಂಧ ಇದೆ ಅಂತ ಅವರಿಗೂ ಚೆನ್ನಾಗಿ ಗೊತ್ತಾಗಿ ಹೋಗಿದೆ. ೧೯೯೮ ಸುಮಾರಿಗೆ y2k ಅಂತ ಸಂತೋಷದಿಂದ ಅಮೇರೀಕಾಗೆ ಹೋದ ದೊಡ್ಡ ಮಗ ೨೦೦೧ ಇಸ್ವಿ ಹೊತ್ತಿಗೆ ಡಾಟ್ ಕಾಮ್, ಬಿದ್ದೋಯ್ತು, ರಿಸೆಶನ್ ಅಂತೆಲ್ಲಾ ಹೇಳಿಕೊಂಡು ಕೆಲ್ಸಾ ಕಳ್ಕೊಂಡು ವಾಪಸ್ಸು ಬೆಂಗಳೂರಿಗೆ ಬಂದು ಇಲ್ಲೇ ಕಷ್ಟ ಪಟ್ಟು ಕೆಲಸ ಹುಡುಕಿಕೊಂಡಿದ್ದು ಅವರ ನೆನಪಿನಿಂದ ಇನ್ನೂ ಮಾಸಿಲ್ಲ.

ಕುದುರೆಯಂತೆ ವೇಗವಾಗಿ ಓಡುತ್ತಿರುವ ಆರ್ಥಿಕತೆ ಎಂದು ವೇಗ ಕಡಿಮೆ ಮಾಡುವುದೇ ಇಲ್ಲವೆನ್ನುವ ಹುಮ್ಮಸ್ಸಿನಲ್ಲಿ, ಕಳಪೆ ದರ್ಜೆ ಸಾಲಗಾರರಿಗೆಲ್ಲ, ಗೃಹ ಸಾಲ ಮಂಜೂರು ಮಾಡಿದ ತಪ್ಪು ಒಂದು ದಿವಸ ಸಬ್ ಪ್ರೈಮ್ ಕ್ರೈಸಿಸ್ ಎಂಬ ದೊಡ್ಡ ಭೂತವಾಗಿ ಕಾಡುತ್ತದೆಂದೂ, ಇದರಿಂದ ದೊಡ್ಡ ದೊಡ್ಡ ಬ್ಯಾಂಕ್‌ಗಳು ಹಾಗೂ ಇನ್‌ವೆಸ್ಟ್‌ಮೆಂಟ್ ಬ್ಯಾಂಕ್‌ಗಳು ನೂರಾರು ಬಿಲಿಯನ್ ಡಾಲರ್‌ಗಳ ಪಂಗನಾಮ ಹಾಕಿಸಿಕೊಳ್ಳ ಬೇಕಾಗುತ್ತದೆಂದೂ ಯಾವ ದೊಡ್ಡ ದೊಡ್ಡ ಆರ್ಥಿಕ ತಜ್ಞನೂ ಉಹಿಸಿರಲಿಲ್ಲ . ಈ ಸಬ್ ಪ್ರೈಮ್ ಕ್ರೈಸಿಸ್‌ನಿಂದ  ಅಮೆರಿಕದ ಬ್ಯಾಂಕ್‌ಗಳಿಗೆ ಬಿದ್ದ ಹೊಡೆತ ಭಾರತದ ಸಾಫ್ಟ್‌ವೇರ್ ಕಂಪನಿಗಳಿಗೂ ಬಿದ್ದು ಸಾವಿರಾರು ಜನ ನೌಕರಿ ಕಳೆದುಕೊಂಡಿದ್ದು ಇನ್ನೂ ನೆನಪಿನಲ್ಲೇ ಹಸಿರಾಗಿರುವಾಗಲೇ, ಇದರಿಂದಲೇ ಶುರುವಾಗಿರಬಹುದಾದ ಅಥವಾ ಇದು ಒಂದು ಕಾರಣವಾಗಿರಬಹುದಾದ, ಮತ್ತೊಂದು ಸುನಾಮಿ ಅಮೆರಿಕಾದ ಇನ್‌ವೆಸ್ಟ್‌ಮೆಂಟ್ ಬ್ಯಾಂಕ್‌ಗಳನ್ನು ನೆಲಸಮ ಮಾಡಲು ದಾಳಿ ಮಾಡಿದೆ.

ಈ ಬಾರಿ ದಾಳಿ ಮಾಡಿದ ಶತ್ರು derivative ಎಂಬ complicated financial instrument ಹಾಗೂ liquidity crisis ಎಂಬ ನಾನಾ ರೂಪವನ್ನು ಧರಿಸಿ ಎಲ್ಲ ದಿಕ್ಕಿನಿಂದಲೂ ಆರ್ಥಿಕತೆಯ pillar ಗಳಾದ ಬ್ಯಾಂಕ್‌ಗಳ ಮೇಲೆ ನೇರ ಧಾಳಿ ಮಾಡಿ ಲೇಮನ್ ಬ್ರದರ್ಸ್ ಎಂಬ ದೈತ್ಯನನ್ನೇ ಕೆಡವಿದೆ. ಮುನ್ನುಗ್ಗುತ್ತಿರುವ ಗೂಳಿಯನ್ನೇ ಲಾಂಛನ ವಾಗಿಟ್ಟುಕೊಂಡಿರುವ ಮೆರಿಲ್ಲ್ ಲಿಂಚ್‌ನನ್ನು ಮಣ್ಣು ಮುಕ್ಕಿಸಿದೆ. ಸಾಲಗಿ ಜೋಡಿಸಿಟ್ಟ ಇಸ್ಪೀಟ್ ಎಲೆಗಳು ಒಂದಾದ ಮೇಲೆ ಒಂದು ಬೀಳುವಂತೆ ಈ ಪ್ರಪಂಚದಾದ್ಯಂತ ಶೇರು ಮಾರುಕಟ್ಟೆಗಳ ಮೇಲೆ,  ಕರೆನ್ಸಿ ಮಾರುಕಟ್ಟೆಗಳ ಮೇಲೆ cascading effect ಪ್ರಾರಂಭವಾಗಿದೆ. ಭಾರತದಲ್ಲಿನ ಬಹುಪಾಲು ಸಾಫ್ಟ್‌ವೇರ್ ಕಂಪನಿಗಳ  ಶೇಕಡ ೬೦ ರಷ್ಟು ಆದಾಯ ಬರುವುದು BFSI (Banking, Financial service, Insurance) ಸೆಗ್‌ಮೆಂಟ್‌ನಿಂದಲೇ. ಹಾಗಾಗಿ, ಇದು ಭಾರತದ ಸಾಫ್ಟ್‌ವೇರ್  ಕಂಪನಿಗಳ ಪಾಲಿಗೆ ದೊಡ್ಡ ತಲೆ ನೋವಾಗಿದೆ. ಪ್ರತಿ ವರ್ಷ ಸಾವಿರಾರು ಪಧವಿಧಾರರಿಗೆ ಉದ್ಯೋಗ ನೀಡುತ್ತಿರುವ ಭಾರತೀಯ BPO ಗಳ ಬಹುಮಟ್ಟಿನ ವ್ಯವಹಾರ ಬರುವುದು ಈ ಸೆಗ್‌ಮೆಂಟ್ ನಿಂದಲೇ.

ಈ ತರಹದ ತಲೆ ಹನ್ನೆರಡಾಣೆ ಆಗೊಂತಹ ವ್ಯವಹಾರಗಳನ್ನು ನೋಡುತಿದ್ರೆ,  “ನಮ್ಮ ಮಕ್ಕಳು  ಈ ಸುಡುಗಾಡು ಸಾಫ್ಟ್‌ವೇರ್ ಬದಲು ನಮ್ಮೆಜಮಾನರ ತರಹ ಯಾವುದಾದರೋ ಸರ್ಕಾರಿ ಉದ್ಯೋಗದಲ್ಲಿದ್ದು ನೆಮ್ಮದಿಯಾಗಿರಬಹುದಿತ್ತಲ್ವಾ” ಅಂತ ಸುಬ್ಬಮ್ಮನಿಗನಿಸಿದರೆ  ಆಶ್ಚರ್ಯವೇನಿಲ್ಲವಲ್ಲವೇ?

 

(ಕೆಂಡಸಂಪಿಗೆ ಗಾಗಿ ಬರೆದದ್ದು, ಸೆಪ್ಟೆಂಬರ್ ೨೨`೦೮)

ಅರ್ಥ- ಅನರ್ಥ

 

ಮೊನ್ನೆ ಇದ್ದಕ್ಕಿದ್ದ ಹಾಗೆ, ಎಲ್ಲಿಂದಲೋ ಪ್ರತ್ಯಕ್ಷನಾದ ಅವನು ‘ಒಂದು ಅಮೆರಿಕನ್ ಡಾಲರ್ ಒಂದು ಭಾರತೀಯ ರೂಪಾಯಿಗೆ ಸಮ ಅಂತ ಸರ್ಕಾರ ಘೋಷಿಸಿಬಿಟ್ರೆ, ನಮ್ಮ ಎಲ್ಲ ಸಮಸ್ಯೆಗಳು ಪರಿಹಾರ ಆಗುತ್ತೆ ಅಲ್ವಾ?’ ಅಂತ ಹೇಳಿಬಿಟ್ಟ. ಅದು ಹಾಗಲ್ಲಪ್ಪ ಅಂತ ನಾನು, ಗೋಲ್ಡ್ ಸ್ಟ್ಯಾಂಡರ್ಡ್, ಬ್ರೆಟನ್ ವುಡ್, ಫ್ರೀ ಫ್ಲೋಟ್ ಅಂತ ನನಗೆ ಗೊತ್ತಿರುವ ಅರ್ಥಶಾಸ್ತ್ರದ ಥಿಯರೀ ಎಲ್ಲ ಹೇಳಿದರೂ, ಅವನು ಕನ್ವಿನ್ಸ್ ಆದ ಹಾಗೆ ಕಾಣಲಿಲ್ಲ. ‘ತಮ್ಮ ದೇಶದ ಉತ್ಪನ್ನಗಳಿಗೆ ಹೆಚ್ಚು ಹೆಚ್ಚು ದುಡ್ಡು ಬರಲಿ ಅಂತ, ಅಮೆರಿಕದಂತಹ ಮುಂದುವರಿದ ರಾಷ್ಟ್ರಗಳು ಹಾಗೂ ಅವುಗಳ ಚೇಲಾಗಳಾದ ಬಹುರಾಷ್ಟ್ರೀಯ ಕಂಪನಿಗಳು ನಡೆಸುತ್ತಿರುವ ಹುನ್ನಾರ, ಇದಕ್ಕೆ ನಮ್ಮ ಸರ್ಕಾರಗಳು ತಲೆ ಬಾಗುತ್ತಿವೆ’ ಅಂತ ಮತ್ತೊಂದು ಅನಾಹುತಕಾರಿ ಹೇಳಿಕೆ ಕೊಟ್ಟು ಸುಮ್ಮನಾಗಿ ಬಿಟ್ಟ.

ಇವನ ಮಾತು ಕೇಳಿ ನನಗೆ ಕೆಲ ವರ್ಷಗಳ ಹಿಂದೆ ಮೌಲ್ಯ ವರ್ಧಿತ ತೆರಿಗೆ(VAT) ಯನ್ನು ಅಳವಡಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದ್ದಾಗ, ಸ್ವದೇಶಿ ಚಳುವಳಿಯ ಬಹುಮುಖ್ಯ ವಕ್ತಾರರೊಬ್ಬರು ‘ವ್ಯಾಟ್ ಅಳವಡಿಸುವ ಸರ್ಕಾರದ ಉದ್ದೇಶದ ಹಿಂದೆ ಮುಂದುವರೆದ ರಾಷ್ಟ್ರಗಳ ಪಿತೂರಿಯಿದೆ. ಇದರಿಂದ ಬಡ, ಮಧ್ಯಮ ವರ್ಗದ ಜನರಿಗೆ ತೊಂದರೆಯುಂಟಾಗುತ್ತದೆ’ ಎಂದು ರಾಜ್ಯದ ಪ್ರಮುಖ ನಗರಗಳಲ್ಲಿ, ಸಾರ್ವಜನಿಕ ಸಭೆಗಳಲ್ಲಿ ಘಂಟಾಘೋಷವಾಗಿ ಹೇಳಿದ್ದು ನೆನಪಾಯಿತು.

ಸರ್ಕಾರದ ಈ ಪಾಲಿಸಿಗಳು ಯಾವುದೇ ಲೋಪ ದೋಷಗಳು ಇಲ್ಲದ್ದು ಅಂತ ಹೇಳುವುದು ನನ್ನ ಉದ್ದೇಶವಲ್ಲ. ಆದರೆ, basic understanding ಇಲ್ಲದೆಯೇ, ದೊಡ್ಡ ಮಟ್ಟದ ಚರ್ಚೆಗಳನ್ನು ಹುಟ್ಟುಹಾಕುವವರ ಹಾಗೂ misinformation campaign ಗಳನ್ನು ಯಶಸ್ವಿಯಾಗಿ ನಡೆಸುವವರ ಬಗ್ಗೆ ನನ್ನ ಆಕ್ಷೇಪ.
                          ************************************

ವಿಶ್ವಬ್ಯಾಂಕ್ ನ ಇತ್ತೀಚಿನ ವರದಿಗಳ ಪ್ರಕಾರ, ಪ್ರಪಂಚದಲ್ಲಿ ಅತಿ ಹೆಚ್ಚಿನ ಬಡವರ ಸಂಖ್ಯೆಯಿರುವುದು ಭಾರತದಲ್ಲಿ. ಸುಮಾರು 460 ಮಿಲಿಯನ್. ಅಂದರೆ ನಮ್ಮ ಜನಸಂಖ್ಯೆಯ ಶೇಕಡ 42 ರಷ್ಟು. ವಿಶ್ವಬ್ಯಾಂಕ್ ಪ್ರಕಾರ ದಿನಕ್ಕೆ 1.25 ಅಮೆರಿಕನ್ ಡಾಲರ್ ಗಿಂತ (ಅಂದಾಜು, ಭಾರತದ 55 ರೂಪಾಯಿಗಳು) ಕಡಿಮೆ ಆದಾಯ ಇರುವವನು ಬಡವನು ಎಂದು. ಆದರೆ ಏಶಿಯನ್ ಡೆವೆಲಪ್‌ಮೆಂಟ್ ಬ್ಯಾಂಕ್ ನ  ಪ್ರಕಾರ ಒಬ್ಬ ವ್ಯಕ್ತಿಯ ಆದಾಯ ದಿನಕ್ಕೆ ಅಮೆರಿಕನ್ ಡಾಲರ್ 1.35 ಕ್ಕಿಂತ ಕಡಿಮೆಯಿದ್ದರೆ ಅವನು ಬಡವ. ಇದರ ಪ್ರಕಾರ ಭಾರತದಲ್ಲಿ ಸುಮಾರು 600 ಮಿಲಿಯನ್ ಬಡವರಿದ್ದಾರೆ.

ಆದರೆ ಭಾರತ ಸರ್ಕಾರದ ಲೆಕ್ಕಾಚಾರವೇ ಬೇರೆ. ನಮ್ಮಲ್ಲಿ ಬಡತನವನ್ನು ಪ್ರತಿ ದಿನ ವ್ಯಕ್ತಿಯೊಬ್ಬ ತೆಗೆದುಕೊಳ್ಳುವ ಆಹಾರದ ಕ್ಯಾಲೊರಿ ಪ್ರಮಾಣ ಆಧರಿಸಿ ನಿರ್ಧರಿಸಲಾಗುತ್ತದೆ. ಇದರ ಪ್ರಕಾರ ನಮ್ಮಲ್ಲಿ ಇರುವ ಬಡವರ ಸಂಖ್ಯೆ 300 ಮಿಲಿಯನ್! ಆದರೆ ಈ ಮುನ್ನೂರು ಮಿಲಿಯನ್ ಸಂಖ್ಯೆಯಲ್ಲಿ SIZE ZERO ಹೊಂದಲು ಕಸರತ್ತು ನಡೆಸಿ ಊಟ ಬಿಟ್ಟಿರುವ, ನಮ್ಮ ಚಲನಚಿತ್ರ ತಾರೆಯರು, ಹಾಗೂ ಬೆಕ್ಕಿನ ನಡಿಗೆಯ ಬೆಡಗಿಯರ ಸಂಖ್ಯೆಯೂ ಸೇರಿದೆಯೊ ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ!!!!

(ಕೆಂಡಸಂಪಿಗೆ ಗಾಗಿ ಬರೆದದ್ದು  ಸೆಪ್ಟೆಂಬರ್ ೨೦೦೮)

ಸ್ಕರ್ಟ್‌ನ ಉದ್ದ ಮತ್ತು ಶೇರು ಸೂಚ್ಯಂಕ

ಶೇರು ಮಾರುಕಟ್ಟೆಗೂ ಸ್ಕರ್ಟ್‌ನ ಉದ್ದಕ್ಕೂ (length) ಏನಾದರೂ ಸಂಬಂಧ ಇದೆಯಾ? ನಗ ಬೇಡಿ. ಅಥವಾ ಇದೆಂತಹ ಅಸಂಬದ್ಧ ವಾದವಿರಬಹುದೆಂದು ಅನಿಸುತ್ತಿದೆಯೇ?
ಹೌದು, ಆ ತರಹದೊಂದು ಥಿಯರಿ ಇದೆ. ಅದನ್ನು Hemline Theory/Indicator ಎಂದು ಕರೆಯಲಾಗುತ್ತದೆ. ರಾಲ್ಪ್ ರಾಟ್ನಂ ಎಂಬ ಹಾರ್ವರ್ಡ್ ವಿಶ್ವವಿದ್ಯಾಲಯದ ಪದವೀಧರನಿಂದ ರೂಪಿಸಲ್ಪಟ್ಟ ಹಾಗೂ ಪ್ರಚಲಿತಗೊಂಡ ಈ ಸಿದ್ದಾಂತ, ಶೇರು ಮಾರುಕಟ್ಟೆಗೆ ಸಂಬಂಧಪಟ್ಟ ಅನೇಕ ಘಟಾನುಘಟಿಗಳಿಂದಲೇ ಭೇಷ್! ಎನಿಸಿಕೊಂಡಿದೆ.

ಈ ಥಿಯರಿ ಬಹಳ ಸರಳವಾದದ್ದು. ಹೆಂಗಸರು ಅಥವಾ ಹುಡುಗಿಯರು ಧರಿಸುವ ಸ್ಕರ್ಟ್‌ನ ಉದ್ದ ಚಿಕ್ಕದಾದಂತೆ ಶೇರು ಮಾರುಕಟ್ಟೆಯ ಸೂಚ್ಯಂಕ ಮೇಲೇರುತ್ತದೆ. ಹಾಗೂ ಉದ್ದವಾದಂತೆ ಸೂಚ್ಯಂಕ ಕೆಳಗಿಳಿಯುತ್ತದೆ. ಮೇಲ್ನೋಟಕ್ಕೆ ಸಂಬಂಧವೆ ಇಲ್ಲದಂತೆ ಕಂಡರೂ, ಇದರ ಹಿಂದೆ, ಜನರ ಸಾಮಾಜಿಕ ಸ್ಥಿತಿ ಗತಿ, ಹಾಗೂ ಆರ್ಥಿಕ ಪರಿಸ್ಥಿತಿಯನ್ನು ಶೇರು ಮಾರುಕಟ್ಟೆಯ ಸೂಚ್ಯಂಕದೊಡನೆ ಸಮೀಕರಿಸುವ ಒಂದು ಪ್ರಯತ್ನವಿದೆ. ರಾಲ್ಪ್‌ನ ಪ್ರಕಾರ ಜನರ ಆರ್ಥಿಕ ಪರಿಸ್ಥಿತಿ ಉತ್ತಮವಾದಂತೆ ಅವರ ಆತ್ಮವಿಶ್ವಾಸ ಹೆಚ್ಚಾಗುತ್ತದೆ, ಅವರು ಹೆಚ್ಚು ಸಂತೋಷದಾಯಕವಾಗಿರುತ್ತಾರೆ, ಇದು ಅವರ ವರ್ತನೆಯಲ್ಲಿ, ಧರಿಸುವ ಧಿರಿಸಿನಲ್ಲಿ ವ್ಯಕ್ತಗೊಳ್ಳುತ್ತದೆ, ಜೀವನ ಶೈಲಿ ಬಹು ಮಟ್ಟಿಗೆ ಬದಲಾವಣೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಫ್ಯಾಶನ್ ಪ್ರಪಂಚದಲ್ಲೂ ಬದಲಾವಣೆಯ ಗಾಳಿ ಬೀಸುತ್ತದೆ. ಸ್ಕರ್ಟ್‌ನ ಉದ್ದದಲ್ಲಿ ವ್ಯತ್ಯಾಸವಾಗುತ್ತಾ ಹೋಗುತ್ತದೆ, ಮಿನಿ ಹಾಗೂ ಮೈಕ್ರೋ ಸ್ಕರ್ಟ್‌ಗಳ ಬಳಕೆ ಹೆಚ್ಚಾಗತೊಡಗುತ್ತದೆ.

೧೯೨೦ ಹಾಗೂ ೧೯೬೦ ರ ದಶಕದ ಅಮೇರಿಕದ ಶೇರು ಮಾರುಕಟ್ಟೆಯ ಅಧ್ಯಯನವನ್ನು ಹಾಗೂ ಅಂದಿನ ದಿನಗಳಲ್ಲಿ ಚಾಲ್ತಿಯಿದ್ದ, ಫ್ಯಾಶನ್‌ನ ಅಧ್ಯಯನ ಮಾಡಿ ಸ್ಕರ್ಟ್‌ನ ಉದ್ದ ಹಾಗೂ ಶೇರು ಮಾರುಕಟ್ಟೆಯ ಪರಿಸ್ಥಿತಿಗೆ ಬಹಳ ನೇರವಾದ ಸಂಬಂಧವಿದೆಯೆಂದು ಸಾರಿತು ಈ ಸಿದ್ದಾಂತ. ಉತ್ತಮಗೊಂಡ ಆರ್ಥಿಕ ಪರಿಸ್ಥಿತಿ ಜನರನ್ನು ಹೆಚ್ಚು ಹೆಚ್ಚು ಖರ್ಚು ಮಾಡುವಂತೆ ಪ್ರೇರೇಪಿಸುತ್ತದೆ, ಹಾಗೂ ಮಾರುಕಟ್ಟೆಯಲ್ಲಿ ಹೆಚ್ಚಾದ ಹಣದ ಪ್ರಮಾಣ (Liquidity factor) ಶೇರು ಮಾರುಕಟ್ಟೆಗೂ ಹರಿದು ಸೂಚ್ಯಂಕ ಮೇಲೇರುವಂತೆ ಮಾಡುತ್ತದೆ.

ಇದೆಂತಹ ಥಿಯರಿ? ಆರ್ಥಿಕ ಪರಿಸ್ಥಿತಿಯೊಂದೆ ಅಲ್ಲ, ಹವಾಮಾನ ಬದಲಾವಣೆಯೂ ಸಹ ಜನರು ಧರಿಸುವ ವಸ್ತ್ರಗಳನ್ನು ನಿರ್ಧರಿಸುತ್ತದೆ, ಡಿಸೆಂಬರ್ ತಿಂಗಳಿನ ಚಳಿಯಲ್ಲಿ ಯಾರಾದರೂ ಮಿನಿ ಸ್ಕರ್ಟ್ ಧರಿಸಲು ಸಾಧ್ಯವೇ? ಹಾಗಾದರೆ ಪ್ರತಿ ಚಳಿಗಾಲದಲ್ಲೂ ಶೇರು ಮಾರುಕಟ್ಟೆ ಬೀಳುತ್ತದೆಯೇ? ಎಂದೆಲ್ಲ ಟೀಕಾಕಾರರು ಪ್ರಶ್ನಿಸಿದ್ದಾರೆ. ಈ ಥಿಯರಿಯನ್ನು ನೇರವಾಗಿ ಭಾರತದಂತಹ, ಸ್ವಲ್ಪ ಮಟ್ಟಿನ ಮಡಿವಂತ ಹಾಗೂ, ಉದ್ದಗಲಕ್ಕೂ ವೈವಿಧ್ಯಮಯವಾದ ಉಡುಪನ್ನು ಧರಿಸುವ ಜನರಿರುವ ದೇಶದಲ್ಲಿ ಪರೀಕ್ಷಿಸಲು ಸಾಧ್ಯವಾಗದೆಂಬುದು ವಾಸ್ತವ. ವಾದ ವಿವಾದಗಳು ಏನೇ ಇದ್ದರೂ, ಇವತ್ತಿಗೂ ಶೇರು ಮಾರುಕಟ್ಟೆಯ ಹುಚ್ಚಿರುವ ಜನರನ್ನು, ಡಿಸೆಂಬರ್‌ನ ಚಳಿ ಹಾಗೂ ಏಪ್ರಿಲ್‌ನ ಬಿರುಬಿಸಿಲಿನಲ್ಲೂ ಈ ಥಿಯರಿ ಮತ್ತೆ ಮತ್ತೆ ತನ್ನೆಡೆ ಸೆಳೆಯುತ್ತದೆ.

(ಕೆಂಡಸಂಪಿಗೆ ಗಾಗಿ ಬರೆದದ್ದು -೩೧ ಜುಲೈ ೨೦೦೮)

ಹಣದುಬ್ಬರ ಎಂದರೇನು?

 

ನಿಮ್ಮ ಜೀವನದಲ್ಲಿ ಹಣದುಬ್ಬರದ ಪ್ರಮಾಣ ಹಾಗು ಪ್ರಭಾವ ಏನು? ಅಂತ ಕೇಳಿದ್ರೆ ನೀವು ಏನು ಹೇಳುತ್ತೀರಾ? ಪೇಪರ್ ತೆಗೆದು ನೋಡಿ ಶೇಕಡ ೧೦ ಅಥವಾ ೧೧ ಅಂತ ಹೇಳುತ್ತೀರಾ? ಅಥವಾ?.

 ಅದಕ್ಕಿಂತ ಮೊದಲು ನಮಗೆಲ್ಲ ಗೊತ್ತಿರೋ inflation ಅಂದ್ರೆ ಏನು ಅಂತ ಸ್ವಲ್ಪ ಬ್ರಶಪ್ ಮಾಡಿಕೊಂಡು ಬಿಡಣ. ಬಹಳ ಸರಳ ವಾಗಿ ಹೇಳಬೇಕಾದ್ರೆ, ಹೋದವರ್ಷ ನಾವು ನಮ್ಮ ಅಗತ್ಯ ವಸ್ತು ಗಳಿಗಾಗಿ ಖರ್ಚು ಮಾಡಿದ್ದು ಎಷ್ಟ್ತು?
ಹಾಗು ಅದೇ ಗುಣಮಟ್ಟದ ಹಾಗು ಪ್ರಮಾಣದ ವಸ್ತು ಗಳಿಗೆ ವರ್ಷ ಎಷ್ಟ್ತು ಖರ್ಚು ಮಾಡುತಿದ್ದೇವೆ ಎಂಬುದು ಎಲ್ಲರಿಗೂ ಸರಳವಾಗಿ ಅರ್ಥವಾಗುವಂತದೇ. ಖರ್ಚಿನಲ್ಲಿನ ಶೇಕಡವಾರು ವ್ಯತ್ಯಾಸ ಹೆಚ್ಚಾಗಿದ್ದಲ್ಲಿ ಅದನ್ನು ಹಣದುಬ್ಬರವೆನ್ನುತ್ತೆವೆ ಹಾಗು ಅದು ಶೇಕಡ ಅಷ್ಟ್ತು ಇಷ್ತ್ತು ಎಂದು ಹೇಳುತ್ತೇವೆ  

 

 

ಸರ್ಕಾರದ ಕಡೆ ಇಂದ ಬರುವಂತಹ ಹಣದುಬ್ಬರದ ಬಗೆಗಿನ ಮಾಹಿತಿಗಳೆಲ್ಲಾ,WPI (wholesale price index) ಆಧಾರವಾಗಿರುತ್ತದೆ. WPI ನಲ್ಲಿ ಅನೇಕ ದಿನ ಬಳಕೆಯ ವಸ್ತುಗಳನೊಳಗೊಂಡ ಪಟ್ಟಿಯಿರುತ್ತದೆ ಹಾಗು ಇವೆಲ್ಲವೂ ಜನಸಾಮಾನ್ಯರು ತಮ್ಮ ಜೀವನದಲ್ಲಿ ಯಾವ ಯಾವ ಪ್ರಮಾಣ ದಲ್ಲಿ ಉಪಯೋಗಿಸುತ್ತಾರೆ ಎಂಬುದನ್ನು ಆಧರಿಸಿ ಹಣದುಬ್ಬರದ ಪ್ರಮಾಣ ನಿರ್ಧರಿಸಲಾಗುತ್ತದೆ.
ತುಂಬಾ ಸರಳವಾದ ವಿಷಯ ವೆಂದರೆ, ಪಟ್ಟಿಯಲ್ಲಿರುವ ಅನೇಕ ವಸ್ತುಗಳನ್ನು ನಾವು ಉಪಯೋಗಿಸುವುದೇ ಇಲ್ಲ, ಹಾಗು ಇವುಗಳನ್ನು ನಾವು ಯಾವ ಯಾವ ಪ್ರಮಾಣದಲ್ಲಿ ಉಪಯೋಗಿಸುತ್ತವೆ ಎಂಬುದು ಸಹ ಬೇರೆ ಬೇರೆ ಯದೇ ಆಗಿರುತ್ತದೆ.
ನಿಜವಾಗಿಯೂ ನಿಮಗೆ ಹಣದುಬ್ಬರದ ಹೊಡೆತ ಯಾವ ಪ್ರಮಾಣದಲ್ಲಿ ಬಿಳುತ್ತಿದೆ ಎಂಬುದನ್ನು ನೀವು ತಿಳಿಯಬೇಕಿದ್ದರೆ. ನಿಮ್ಮ ತಿಂಗಳ ಖರ್ಚಿನ ಪಟ್ಟಿಯನ್ನು ,(ವಸ್ತುಗಳ ಗುಣಮಟ್ಟ ಹಾಗು ಪ್ರಮಾಣ, ಎರಡು ಕಾಲ ಘಟ್ಟದಲ್ಲೂ ಸಹ ಸಮನಾಗಿರತಕ್ಕದ್ದು.) ಹೋದ ವರ್ಷದ ಪಟ್ಟಿಯೊಡನೆ ಹೋಲಿಸಿ ನೋಡಿ, ಅದು ನಿಮಗೆ ಆಘಾತವನ್ನು ತರಬಹುದು ಸಹ. ಕೆಲವರಿಗೆ ಇದು ಶೇಕಡ ೨೫ ರಿಂದ ೩೦ ವರೆಗೂ ಆಗಿರುವ ಸಾಧ್ಯತೆ ಇರುತ್ತದೆ. ಒಂದು ಸಣ್ಣ ಉದಾಹರಣೆಯನ್ನು ಕೆಳಗೆ ಕೊಟ್ಟಿದ್ದೇನೆ.

Particulars

Last year

Current Year

%Increase

Rent

10

12

20%

Food

15

22

47%

Clothing

20

19

-5%

Fuel

8

14

75%

Education

19

20

5%

Health

6

7

17%

others

22

24

9%

Total

100

118

18%

ಇದರ ಪ್ರಕಾರ ಲೆಕ್ಕಾಚಾರ ಮಾಡಿ ಆನಂತರ ನಿರ್ಧರಿಸಿ , ನಿಮ್ಮ ಆದಾಯ ನಿಮ್ಮ ಖರ್ಚಿಗನುಗುಣವಾಗಿ ಹೆಚ್ಚಾಗುತ್ತಿದೆಯೇ ಅಥವಾ??

(ಕೆಂಡಸಂಪಿಗೆ ಗಾಗಿ ಬರೆದದ್ದು ೨೬ ಜೂನ್ ೨೦೦೮) 

 
 
 

 

Election, Global warming, Inflation etcetera….

J

ust few days and the first leg of Assembly elections kicks off in Karnataka, amidst hot sun sucking glucose or whatever from our head using a plastic pipe(Remember Glucon-D advertisement).Many pre poll surveys are doing rounds, each one suiting the ambitions of the author or the brain behind the survey.

 

 A quick check at the temperature stats across India shows an average increase of one to one and half degree Celsius compared to last year, strengthening the Global warming and glacier meltdown theories. Still our cities and semi urban areas are growing with more and more flashy multi storied buildings sporting jazzy glass and fancy steel.

 

Big thanks to Chief election commissioner and all other responsible for conducting elections, for having made this election, relatively noise and plastic free and there by contributing towards green and clean environment. Reduced noise pollution, curb on use of plastic for banners and buntings have really made this election tolerable even during this hot summer.

 

Inflation much to the embarrassment of ruling coalition at the center has come as a handy weapon for the non ruling parties fighting elections. Will this inflation do what increased `Aalu Pyaaz` price did for Vajpayee government few years back? Will have to wait and see.

 

Latest food for thought: Here comes another salvo fired by US President on the reasons behind global inflation. According to Bush, increased consumption by Indian middle class along with China is the main cause for Global inflation and increased commodity prices. Our political parties are already up in arms and have started making Bush’s effigy for the protest rallies.

 

President Bush is not completely wrong when he says that increased demand for food and oil from India and china is driving the global prices. At least he is partially correct from `Demand` side perspective. India and China are the fastest growing developing economies (8+ percentage growth) in the world driving demand for commodity and oil world wide.

But there are big and compelling reasons from supply side also, coupled with excessive shifting of focus on bio fuels and many more from various other quarters.

 

Finally… Exercise your franchise.Don’t forget or neglect.

 

You don’t have right to complain or blame also, if you don’t vote.

« Older entries Newer entries »